Slide
Slide
Slide
previous arrow
next arrow

ಮಾಂಗಲ್ಯ ಸರ ಕದ್ದಿದ್ದ ಈರ್ವರ ಬಂಧನ

300x250 AD

ಮುಂಡಗೋಡ: ಶಿಕ್ಷಕಿಯೊಬ್ಬರ ಕೊರಳಿನಿಂದ ತಾಳಿ ಕದ್ದು ಪರಾರಿಯಾಗಿದ್ದ ಈರ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸವಣೂರಿನ ಅಪ್ಜಲ್ ಖಾದರಗೌಸ್ ಗವಾರಿ ಹಾಗೂ ದಾದಾಪೀರ್ ಮಿರ್ಜಿ ಬಂಧಿತರು. ಇವರು ಪಟ್ಟಣದ ಶಾಸಕರ ಮಾದರಿ ಶಾಲೆಯ ಶಿಕ್ಷಕಿ ರಸ್ತೆಯಲ್ಲಿ ನಡೆದುಕೊಂಡು ತೆರಳುತ್ತಿದ್ದ ವೇಳೆ ಸ್ಕೂಟಿಯಲ್ಲಿ ಬಂದು ಕೊರಳಿನಲ್ಲಿದ್ದ 22 ಗ್ರಾಂ ಚಿನ್ನದ ತಾಳಿಯನ್ನ ಕಿತ್ತುಕೊಂಡು ಪರಾರಿಯಾಗಿದ್ದರು.

ಪಿಐ ಸಿದ್ದಪ್ಪ ಸಿಮಾನಿ, ಪಿಎಸ್‌ಐ ಯಲ್ಲಾನಿಂಗ ಕುನ್ನೂರ, ಹನಮಂತ ಕುಡಗುಂಟಿ, ಸಿಬ್ಬಂದಿಗಳಾದ ಮಹಮ್ಮದ ಸಲೀಂ, ಗಣಪತಿ ಹುನ್ನಳ್ಳಿ, ಅನ್ವರಖಾನ್, ಬಸವರಾಜ ಲಮಾಣಿ, ಮಹಾಂತೇಶ, ತಿರುಪತಿ ಚೌಡಣ್ಣನವರ, ಅಣ್ಣಪ್ಪ ಬುಡಿಗೇರ ಹಾಗೂ ಕೊಟೇಶ ನಾಗರವಳ್ಳಿ ತಂಡ ಪ್ರಕರಣದಲ್ಲಿ ಕಳ್ಳರನ್ನ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

300x250 AD

Share This
300x250 AD
300x250 AD
300x250 AD
Back to top